ಮುದ್ರಾ ಯೋಜನೆಯಡಿಯಲ್ಲಿ ಸಾಲ ನೀಡುವ ಮೂಲಕ ಬಡ್ಡಿ ವಸೂಲಿ ಮಾಡುವ ಸಾಲಗಾರರಿಂದ ಕಿರು ಉದ್ದಿಮೆದಾರರನ್ನು ಮುಕ್ತಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ನಿರ್ಮಾಣ, ಸೇವೆ ಮತ್ತು ವ್ಯಾಪಾರ ವಲಯಗಳ ಉದ್ದಿಮೆಗಳಿಗೂ ಮುದ್ರಾ ಸಾಲ ಉಪಯೋಗಕ್ಕೆ ಬರಲಿದೆ.
ಸರ್ಕಾರದಿಂದ ಸಾಲ ನೀಡುವ ಮೂಲಕ ಮತ್ತು ವ್ಯಾಪಾರ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ 5.5 ಕೋಟಿ ಉದ್ಯೋಗ ಸೃಷ್ಟಿಸಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಹೊಸತಾಗಿ ₹55 ಲಕ್ಷ ಜನರು ನೋಂದಣಿ ಮಾಡಿದ್ದು ಉದ್ಯೋಗ ಸೃಷ್ಟಿಯಾಗಿರುವುನ್ನು ಇದು ತೋರಿಸುತ್ತದೆ. ಎಲ್ಲ ಸಾರ್ವಜನಿಕ, ಖಾಸಗಿ, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು, ಆಯ್ದ ಮೈಕ್ರೋಫಿನಾನ್ಸ್ ಸಂಸ್ಥೆ ಮತ್ತು ಸಹಕಾರಿ ಬ್ಯಾಂಕ್ಗಳು ಮುದ್ರಾ ಸಾಲವನ್ನು ನೀಡುತ್ತಿವೆ. ₹50000ದಿಂದ ₹10 ಲಕ್ಷ ವರೆಗೆ ಮುದ್ರಾ ಸಾಲ ಲಭಿಸುತ್ತದೆ.