ಒಂದು ಕ್ವಿಂಟಲ್ ರಾಗಿಗೆ ಈಗ ಬೆಂಬಲ ಬೆಲೆ ₹ 2,300 ಇದೆ. ಆದರೆ 1 ಕ್ವಿಂಟಲ್ ರಾಗಿ ಬೆಳೆಯಲು ರೈತನಿಗೆ ₹ 3,349 ಖರ್ಚಾಗುತ್ತದೆ. ಇದರಲ್ಲಿ ₹ 2,300 ಕಳೆದರೆ ರೈತನಿಗೆ ಸರ್ಕಾರ ಇನ್ನೂ ₹ 1,049 ಕೊಡಬೇಕಾಗುತ್ತದೆ. ಇದು ಎಲ್ಲಾ ಬೆಳೆಗಳಿಗೂ ಅನ್ವಯವಾಗುತ್ತದೆ. ಆದ್ದರಿಂದ ವಾಸ್ತವದಲ್ಲಿ ರೈತ ಸಾಲಗಾರನಲ್ಲ; ಸರ್ಕಾರವೇ ಸಾಲಗಾರ. ರೈತರ ಸ್ಥಿತಿ ಹೀಗಿರುವಾಗ, ಅಣ್ಣಾ ಹಜಾರೆಯವರು ಸಲಹೆ ಮಾಡಿರುವಂತೆ ಈ ಸರ್ಕಾರಗಳು 60 ತುಂಬಿದ ರೈತನಿಗೆ ತಿಂಗಳಿಗೆ ₹ 5,000 ಪಿಂಚಣಿ ನೀಡುವುದುಂಟೇ?