‘ಮಚಿಲಿಪಟ್ಟಣ ಸಮೀಪದ ಗುದ್ಲವಲ್ಲೆರು ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಪದವಿ ಪಡೆದು, ನಂತರ ಅಟ್ಲಾಂಟಿಸ್ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಎಂ.ಎಸ್. ಪದವಿಯನ್ನು ಚೈತನ್ಯ ಪಡೆದಿದ್ದ. ಉದ್ಯೋಗದ ಹುಡಕಾಟದಲ್ಲಿದ್ದ ಈತ, ಕೆಲಸ ಸಿಕ್ಕ ನಂತರ ಊರಿಗೆ ಬರುವುದಾಗಿ ಹೇಳಿದ್ದ’ ಎಂದು ಪೋಷಕರು ತಿಳಿಸಿದ್ದಾರೆ.