ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಜಾಗೃತ ದಳದ ಎಸ್ಪಿ ನಾರಾಯಣ್, ‘ಬೂದಿಗೆರೆ, ತಾಲ್ಲೂಕಿನ ನಂದಗುಡಿ, ಹಿಂಡಿಗನಾಳ, ಚಿಕ್ಕೊಂಡಹಳ್ಳಿ, ಓಬಳಹಳ್ಳಿ, ಚಿಕ್ಕಹುಲ್ಲೂರು, ದೊಡ್ಡಹುಲ್ಲೂರು, ಚೊಕ್ಕಹಳ್ಳಿ, ಯಶವಂತಪುರ, ಹೊಸಹಳ್ಳಿ, ಗಂಗಸಂದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ಮೊದಲ ಬಾರಿಗೆ ವಿದ್ಯುತ್ ಕಳವು ಮಾಡಿ ಸಿಕ್ಕಿಬಿದ್ದವರಿಗೆ ಎಚ್ಚರಿಕೆ ನೀಡಿದ್ದೇವೆ’ ಎಂದರು.