ಜೆಎಸ್ಎಸ್ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಮಾತನಾಡಿ, ’ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಯಷ್ಟೇ ಕುಷ್ಠರೋಗದಂತಹ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದ್ದರು. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಮಾನವೀಯ ಕಳಕಳಿ ತೋರುತ್ತಿದ್ದರು’ ಎಂದು ಸ್ಮರಿಸಿಕೊಂಡರು. ಪ್ರಾಚಾರ್ಯರಾದ ಜಿ.ಸರಳಾಬಾಯಿ, ವೇದವತಿ ತಿವಾರಿ, ಮಹಾವೀರ ಉಪಾಧ್ಯೆ, ಪವಿತ್ರಾ, ಜ್ಯೋತಿ, ವಿ.ಕೆ.ಭರಣಿ ಇದ್ದರು.