ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತನ ಕೊಲೆಗೆ ಪ್ರಕಾಶ್‌ ರೈ ಪ್ರತಿಕ್ರಿಯಿಸದಕ್ಕೆ ಜಗ್ಗೇಶ್‌ ಅಸಮಾಧಾನ

Last Updated 2 ಫೆಬ್ರುವರಿ 2018, 16:33 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಸಂತೋಷ್‌ ಹತ್ಯೆ ಕುರಿತು ನಟ ಪ್ರಕಾಶ್‌ ರೈ ಮತ್ತು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್‌.ದೊರೆಸ್ವಾಮಿ ಮೌನ ವಹಿಸಿರುವುದು ಯಾಕೆ ಎಂದು ಬಿಜೆಪಿ ಮುಖಂಡ, ನಟ ಜಗ್ಗೇಶ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

‘ಮಿತ್ರ ಪ್ರಕಾಶ್ ರೈ ಹಾಗೂ ಪಿತೃಸಮಾನರಾದ ದೊರೆಸ್ವಾಮಿಯವರೆ, ಕೊಲೆಯಾದ ಈ ಕಂದಮ್ಮನ ಬಗ್ಗೆ ಮಾತಾಡಲು ಯಾಕೆ ನಿಮ್ಮ ತುಟಿ ಚಲನೆಯಿಲ್ಲಾ! ಯಾಕೆ ನಿಮ್ಮ ನಾಲಿಗೆ ನುಡಿಯಲಿಲ್ಲಾ.! ಕಾಂಗ್ರೆಸ್ ಪಾಪದ ಋಣ ತಡೆ ಹಿಡಿಯಿತೆ..! ಗಮನಿಸುತ್ತಿದ್ದಾರೆ ಕರುನಾಡ ಜನ. ಪಾರದರ್ಶಕತೆ ನಡೆ ಇರಲಿ! ಇಲ್ಲದಿದ್ದರೆ ನಗೆಪಾಟಲು ಶ್ರಮದ ನಿಮ್ಮ ಬದುಕು!’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಟ್ವೀಟ್‌ಗೆ ಒಂದು ಸಾವಿರಕ್ಕೂ ಹೆಚ್ಚು ಜನ ಲೈಕ್‌ ಒತ್ತಿದ್ದಾರೆ. 200 ಹೆಚ್ಚು ಜನರು ರೀಟ್ವೀಟ್‌ ಮಾಡಿದ್ದಾರೆ. 149 ಜನ ಕಾಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT