ನಮ್ಮಲ್ಲಿ ಆಡಳಿತ ನಡೆಸುವವರು, ‘ಮದ್ಯ ಮಾರಾಟದಿಂದಲೇ ಸರ್ಕಾರಕ್ಕೆ ಆದಾಯ, ಮದ್ಯದ ಹಣದಿಂದಲೇ ಅಗ್ಗದ ಅಕ್ಕಿ ವಿತರಣೆ, ಮದ್ಯದ ಆದಾಯದಿಂದಲೇ ಬಿಸಿಯೂಟ...’ ಎನ್ನುತ್ತಾರೆ. ಇದು ಗಾಂಧಿನಾಡಿನ ಸಂಸ್ಕೃತಿಯೇ? ಮದ್ಯಪಾನದ ದುಷ್ಪರಿಣಾಮ ಎಂಬಂತೆ ಸಮಾಜದಲ್ಲಿ ಭ್ರಷ್ಟಾಚಾರ, ಅನಾರೋಗ್ಯಗಳು ತಾಂಡವವಾಡುತ್ತಿವೆ. ಯುವಕರು ಹಾದಿ ತಪ್ಪುತ್ತಿದ್ದಾರೆ. ಅವರನ್ನೇ ನಂಬಿದ ಕುಟುಂಬಗಳು ಬೀದಿಗೆ ಬಿದ್ದಿವೆ. ಆದರೂ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು, ಚುನಾವಣಾ ಸಮಯದಲ್ಲಿ ಎಲ್ಲರನ್ನೂ ಮದ್ಯದಲ್ಲಿ ‘ತೇಲಿಸುತ್ತಾರೆ’.