‘ಬಾಲಿವುಡ್ ನಟ ಅಕ್ಷಯ್ ಕುಮಾರ್ ಆರಂಭಿಸಿದ, ಕೇಂದ್ರ ಸರ್ಕಾರದ ಸಹಭಾಗಿತ್ವದ ‘ಇಂಡಿಯಾಸ್ ಬ್ರೇವ್ ಹಾರ್ಟ್’ ಸಂಘಟನೆಯ ಜತೆಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದರ ಮೂಲಕ ಸೈನಿಕರ ಕುಟುಂಬಗಳಿಗೆ ನೆರವು ನೀಡಲಾಗುವುದು. ಸುಮಾರು 15 ಸಾವಿರ ಕಿ.ಮೀ ದೂರ ಕ್ರಮಿಸುವ ಗುರಿ ಇದೆ. ಮಂಗಳೂರು, ತಿರುವನಂತಪುರ, ಕನ್ಯಾಕುಮಾರಿ, ಚೆನ್ನೈ, ಕೊಲ್ಕತ್ತ ಮೂಲಕ ಸಾಗಿ ಈಶಾನ್ಯ ರಾಜ್ಯಗಳಲ್ಲಿ ಸಂಚರಿಸಿ ಪುನಃ ವಾಘಾ ತಲುಪಲಿದ್ದೇನೆ’ ಎಂದು ಅವರು ತಮ್ಮ ಪ್ರಯಾಣದ ದಾರಿಯನ್ನು ವಿವರಿಸಿದರು.