ಬೆಂಗಳೂರು: ‘ಕ್ಯಾಥೊಲಿಕ್ ಚರ್ಚ್ಗಳು ದುರ್ಬಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸುತ್ತಿವೆ. ಬಡ ಜನರ ಜತೆ ಉತ್ತಮ ಬಾಂಧವ್ಯ ಹೊಂದಿದೆ’ ಎಂದು ಮ್ಯಾನ್ಮಾರ್ನ ಬಿಷಪ್ ಕಾರ್ಡಿನಲ್ ಚಾರ್ಲ್ಸ್ ಬೊ ಎಸ್ಡಿಬಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಭಾರತದ ಕ್ಯಾಥೊಲಿಕ್ ಬಿಷಪ್ಗಳ ಸಮ್ಮೇಳನದಲ್ಲಿ (ಸಿಬಿಸಿಐ) ಮಾತನಾಡಿದರು.
‘ಭಾರತ ಇಂದು ಬಲಪಂಥೀಯ ಸಿದ್ಧಾಂತದಿಂದ ಅಪಾಯಕ್ಕೆ ಸಿಲುಕಿದೆ. ಅದು ದಮನಿತರ ವಿರುದ್ಧವಾಗಿದೆ. ಆತಂಕ ಮನೆ ಮಾಡಿದೆ. ನಾವೆಲ್ಲರೂ ಒಟ್ಟಾಗಿ ಅದರ ವಿರುದ್ಧ ಹೋರಾಡಬೇಕು. ದ್ವೇಷ ಭಾವನೆ ಹುಟ್ಟು ಹಾಕುವ ವಿಚಾರಗಳನ್ನು ವಿರೋಧಿಸಬೇಕು’ ಎಂದರು.
ನೇಪಾಳದ ಬಿಷಪ್ ಗಿಯಾಂಬಟಿಸ್ಟಾ ಡಿಕ್ವಾಟ್ರೊ, ‘ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾಥೊಲಿಕ್ ಚರ್ಚ್ಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದರು.
ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್, ಸಿಬಿಸಿಐನ ಫಿಲಿಪೆ ನೇರಿ ಫೆರಾವೊ ಇದ್ದರು.