ರಿಜ್ವಿ ಹೇಳಿದ್ದೇನು?: ‘ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣವನ್ನು ವಿರೋಧಿಸುವವರು ಮತ್ತು ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಬೇಕು ಎಂದು ಯಾರು ಆಗ್ರಹಿಸುತ್ತಾರೋ, ಅಂಥ ಮೂಲಭೂತವಾದಿಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶಕ್ಕೆ ಹೋಗಲಿ. ಅಂತಹ ಮುಸ್ಲಿಮರಿಗೆ ಭಾರತದಲ್ಲಿ ಜಾಗವಿಲ್ಲ. ಮಸೀದಿಯ ಹೆಸರಿನಲ್ಲಿ ಜಿಹಾದ್ ಅನ್ನು ಹರಡುವವರು ಸಿರಿಯಾಕ್ಕೆ ಹೋಗಿ ಐಸಿಸ್ ಮುಖ್ಯಸ್ಥ ಅಬು ಬಕರ್ ಬಾಗ್ದಾದಿ ಜತೆ ಸೇರಿಕೊಳ್ಳಲಿ’ ಎಂದು ವಾಸೀಮ್ ರಿಜ್ವಿ ಹೇಳಿದ್ದಾರೆ.