‘ಸಂವಿಧಾನ: ಅಸಹನೆ ಏಕೆ?’ ಲೇಖನದಲ್ಲಿ (ಪ್ರ.ವಾ., ಸಂಗತ, ಫೆ. 2) ಎಚ್.ಡಿ. ಉಮಾಶಂಕರ್ ಅವರು ಸಂವಿಧಾನವನ್ನು ವಿರೋಧಿಸುವವರ ಬಗ್ಗೆ ಅತೃಪ್ತಿಯನ್ನು ಸರಿಯಾಗಿ ಹೊರಹಾಕಿದ್ದಾರೆ. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಉನ್ನತ ಧ್ಯೆಯೋದ್ದೇಶಗಳೊಂದಿಗೆ ರೂಪಿತವಾಗಿರುವ ನಮ್ಮ ಸಂವಿಧಾನ ಯಾಕಾಗಿ ಬದಲಾಗಬೇಕು ಎಂಬ ಪ್ರಶ್ನೆಗೆ ಸಂವಿಧಾನ ವಿರೋಧಿಗಳು ನಿಖರವಾದ ಕಾರಣಗಳನ್ನು ಕೊಡಬೇಕು.