ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟ್ವಿಟರ್ ಸಮರ ಮುಂದುವರೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮೋದಿ ಅವರು ಕರ್ನಾಟಕಕ್ಕೆ ಅಗೌರವ ಉಂಟು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಪ್ರಧಾನಿ ಹುದ್ದೆಯಲ್ಲಿರುವವರು ಮಾಡುವ ಭಾಷಣದಂತೆ ಇರಲಿಲ್ಲ. ಅವರು ಆಡಿದ ಮಾತುಗಳು ಅವರ ಹುದ್ದೆಗೆ ಘನತೆ ತರುವಂತೆ ಇರಲಿಲ್ಲ. ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ’ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಪ್ರಧಾನ ಮಂತ್ರಿ #NarendraModi ಭಾಷಣ ಪ್ರಧಾನಿ ಹುದ್ದೆಯಲ್ಲಿರುವವರು ಮಾಡುವ ಭಾಷಣದಂತೆ ಇರಲಿಲ್ಲ. ಅವರು ಆಡಿದ ಮಾತುಗಳು ಅವರ ಹುದ್ದೆಗೆ ಘನತೆ ತರುವಂತೆ ಇರಲಿಲ್ಲ. ಅವರು ಕರ್ನಾಟಕಕ್ಕೆ ಅಗೌರವ ಉಂಟುಮಾಡಿದ್ದಾರೆ.