ಹೊನ್ನಾವರ: ಪರೇಶ ಮೇಸ್ತ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಆಸಿಫ್ ಮಹಮ್ಮದ್ ರಫೀಕ್ ಶೇಖ್ ಎಂಬಾತನನ್ನು ಸೋಮವಾರ ಬಂಧಿಸಲಾಗಿದೆ. ಪ್ರಕರಣ ಸಂಬಂಧ, ಇದುವರೆಗೆ ಒಟ್ಟು ಮೂವರನ್ನು ಬಂಧಿಸಿದಂತಾಗಿವೆ.
‘ಕೋಮು ಗಲಭೆ ಸಂದರ್ಭದಲ್ಲಿ ಪರೇಶನನ್ನು ಕೊಲೆ ಮಾಡಲಾಗಿದೆ’ ಎಂದು ತಂದೆ ಕಮಲಾಕರ ಬುದ್ವಂತ ಮೇಸ್ತ ಇಲ್ಲಿನ ಪೊಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ಐವರ ಹೆಸರನ್ನು ಅವರು ಉಲ್ಲೇಖಿಸಿದ್ದರು.