ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ, ಮೈಸೂರಿನಲ್ಲಿ ಚಿರತೆ ಹಾವಳಿ: 9 ಕುರಿ ಬಲಿ

Last Updated 6 ಫೆಬ್ರುವರಿ 2018, 7:36 IST
ಅಕ್ಷರ ಗಾತ್ರ

ಮೈಸೂರು/ರಾಮನಗರ: ಕೆಲವು ದಿನಗಳಿಂದ ರಾಜ್ಯದಲ್ಲಿ ಚಿರತೆ ಹಾವಳಿ ಅಧಿಕವಾಗಿದ್ದು, ಜನರ ನಿದ್ದೆಗೆಡೆಸಿದೆ.

ರಾಮನಗರ ತಾಲ್ಲೂಕಿನ ಪೇಟೆ ಕುರುಬರಹಳ್ಳಿ ಗ್ರಾಮದ ಕೊಟ್ಟಿಗೆಗೆ ಸೋಮವಾರ ರಾತ್ರಿ ಚಿರತೆ ನುಗ್ಗಿದ್ದು, 9 ಕುರಿಗಳನ್ನು ಕೊಂದಿದೆ. ಕುರಿಗಳು ಜಯಮ್ಮ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ.

ಬಾಳೆಕಾಯಿ ಮಂಡಿ ಹೊಕ್ಕ ಚಿರತೆ, ಸೆರೆ
ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದ ಉತ್ತನಹಳ್ಳಿ ಹಾಗೂ ಬಂಡೀಪಾಳ್ಯ ನಡುವೆ ಇರುವ ಬಾಳೆಕಾಯಿ ಮಂಡಿಯೊಳಗೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ.

ಬಾಳೆಕಾಯಿ ಮಂಡಿಯೂ ರಾಜಣ್ಣ ಎಂಬುವರಿಗೆ ಸೇರಿದ ಈ ಬಾಳೆಕಾಯಿ ಮಂಡಿಯಲ್ಲಿ ಚಿರತೆಯು ನಸುಕಿನಲ್ಲಿ ನುಗ್ಗಿತ್ತು. ಈ ಬಗ್ಗೆ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿರತೆಯ ವಯಸ್ಸು 6ರಿಂದ 7 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT