ಅಕಾಡೆಮಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ಎಸ್. ನಾರಾಯಣ್, ‘ಇದು ಕೇವಲ ಅಭಿನಯವನ್ನಷ್ಟೇ ಕಲಿಸುವ ಶಾಲೆ ಅಲ್ಲ. ಸಂಕಲನ, ಛಾಯಾಗ್ರಹಣ, ನೃತ್ಯ, ಸಾಹಸ, ಕುದುರೆ ಸವಾರಿ, ಈಜು... ಹೀಗೆ ಚಿತ್ರರಂಗಕ್ಕೆ ಬರುವವರಿಗೆ ಯಾವೆಲ್ಲಾ ಕ್ಷೇತ್ರಗಳಲ್ಲಿ ಪರಿಣತಿ ಇರಬೇಕೋ ಅವೆಲ್ಲವನ್ನೂ ಕಲಿಸುವ ಶಾಲೆ’ ಎಂದರು.