ರಸ್ತೆ ಮೂಲಸೌಕರ್ಯ (ಯೋಜನೆ) ಮುಖ್ಯ ಎಂಜಿನಿಯರ್ ಕೆ.ಟಿ.ನಾಗರಾಜ್, ‘ಮೂಲ ಪ್ರಸ್ತಾವದಲ್ಲಿ ಶಿವಾನಂದ ವೃತ್ತದಿಂದ ರೈಲ್ವೆ ಕೆಳಸೇತುವೆ ಕಡೆಗೆ ರ್ಯಾಂಪ್ ಇಳಿಜಾರಿನ ಪ್ರಮಾಣ ಶೇ 6.6ರಷ್ಟು ಇತ್ತು. ಸೇತುವೆಯು ಇಷ್ಟು ಎತ್ತರ ಇದ್ದರೆ ರೈಲ್ವೆ ಕೆಳಸೇತುವೆ ಮೇಲೆ ಹಾದು
ಹೋಗಲಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಶೇ 5.6ಕ್ಕೆ ಕಡಿತಗೊಳಿಸಲಾಗಿದೆ. ಅದೇ ರೀತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ರ್ಯಾಂಪ್ ಇಳಿಜಾರಿನ ಪ್ರಮಾಣ ಶೇ 5.5ರಷ್ಟು ಇದ್ದದ್ದು ಈಗ ಶೇ 3.5ಕ್ಕೆ ಕಡಿತಗೊಳಿಸಲಾಗಿದೆ’ ಎಂದು ಅವರು ವಿವರಿಸಿದರು.