ಕೂಲಿ ಕೆಲಸದ ಹಣ: ಶಿವಾನಂದ್ ಮಂಕಿಸ್ಟ್ಯಾಂಡ್, ಅತ್ತಾವರ ಸುತ್ತಮುತ್ತ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಅಪಸ್ಮಾರ ರೋಗದಿಂದ ಬಳಲುತ್ತಿದ್ದ ಅವರು, ದುಡಿದ ಹಣವನ್ನು ಜಾಗರೂಕತೆಯಿಂಧ ಕೂಡಿಟ್ಟು, ಬ್ಯಾಂಕ್ ಖಾತೆಗೆ ಜಮಾ ಮಾಡಲು ನೀಡುತ್ತಿದ್ದರು. ಅನಿವಾರ್ಯವಿದ್ದಾಗ ಬ್ಯಾಂಕ್ನಿಂದ ಹಣ ತೆಗೆದು ಊರಿಗೆ ಕೊಂಡೊಯ್ಯುತ್ತಿದ್ದರು ಎಂಬ ಮಾಹಿತಿಯನ್ನು ವೆಲೆನ್ಸಿಯಾದ ಸೆಲೆಕ್ಷನ್ ಬೇಕರಿ ಮಾಲೀಕ ಗುರುಪ್ರಸಾದ್ ಪೊಲೀಸರಿಗೆ ತಿಳಿಸಿದರು.