ತುಮಕೂರು: ’ಮಠ ಮಾನ್ಯಗಳನ್ನು ಧಾರ್ಮಿಕ ದತ್ತಿ ಕಾಯ್ದೆಗೊಳಪಡಿಸುವ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಆದರೆ, ಇಂತಹ ಪ್ರಸ್ತಾವ ಜಾರಿಯಾಗುವುದು ಸಾಧ್ಯವಾಗಲಿಕ್ಕಿಲ್ಲ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯಿಸಿದರು.
ಬುಧವಾರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,‘ ಪ್ರತಿಯೊಂದು ಮಠಕ್ಕೂ ತನ್ನದೇ ಪದ್ಧತಿ, ಅಸ್ತಿತ್ವ, ಸಂಸ್ಕೃತಿ, ಆಚರಣೆಗಳಿವೆ. ಹೀಗಾಗಿ, ಎಲ್ಲವನ್ನೂ ಒಂದೇ ತೆಕ್ಕೆಗೆ ತರುವುದು ಸಾಧ್ಯವಾಗಲಿಕ್ಕಿಲ್ಲ. ಈ ಬಗ್ಗೆ ಮಠಾಧೀಶರೆಲ್ಲರೂ ಕುಳಿತು ಚರ್ಚಿಸಬೇಕಾಗಬಹುದು’ ಎಂದು ಹೇಳಿದರು.