ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಾತ್ಯತೀತ ಸರ್ಕಾರ ಎಲ್ಲರನ್ನು ಸಮಾನಾಗಿ ನೋಡಬೇಕು. ಮುಗ್ದ ಅಲ್ಪಸಂಖ್ಯಾತರ ಮೇಲಿನ ಪ್ರಕರಣ ಹಿಂದಕ್ಕೆ ಪಡೆಯಿರಿ ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಸರ್ಕಾರ ಈ ರೀತಿ ತಾರತಮ್ಯ ಮಾಡುವುದು ಸರಿಯಲ್ಲ. ಒಂದು ವೇಳೆ ನಮ್ಮ ಮಠವನ್ನು ವಶಕ್ಕೆ ಪಡೆದರೆ ನಾನಂತೂ ಮಠವನ್ನೂ ಬಿಟ್ಟು ಹೊರ ಬಂದು ಸಮಾಜವನ್ನು ಆಶ್ರಯಿಸಿ ಬದುಕುತ್ತೇನೆ. ಸರ್ಕಾರದ ನೌಕರನಾಗಿ ಇರುವುದಿಲ್ಲ. ಹೋರಾಟವನ್ನೂ ಮಾಡುವುದಿಲ್ಲ. ಈ ವಿಷಯದ ಬಗ್ಗೆಯೇ ಜನರೇ ತೀರ್ಮಾನ ಮಾಡುವರು’ ಎಂದರು.