ಕೊಲ್ಲಂ ಜಿಲ್ಲೆಯ ಅಂಚಲ್ನಲ್ಲಿರುವ ಅಗಸ್ಥ್ಯಕೋಡೆ ಮಹಾದೇವ ದೇವಸ್ಥಾನದಲ್ಲಿ ಅವರು ಮಂಗಳವಾರ ರಾತ್ರಿ ನೃತ್ಯ ಪ್ರದರ್ಶಿಸುತ್ತಿದ್ದರು. ‘ರಾವಣವಿಜಯಂ’ ಕಥಾನಕದಲ್ಲಿ ರಾವಣನ ಪಾತ್ರಧಾರಿಯಾಗಿದ್ದರು. ದುರ್ಯೋಧನ, ರಾವಣ ಮತ್ತು ಕಂಸನ ಪಾತ್ರಗಳಿಗೆ ವಾಸುದೇವನ್ ಹೆಸರಾಗಿದ್ದರು. 1929ರಲ್ಲಿ ತಿರುವನಂತಪುರದಲ್ಲಿ ಜನಿಸಿದ ನಾಯರ್, 13ನೇ ವಯಸ್ಸಿನಲ್ಲಿ ಕಥಕ್ಕಳಿ ಕಲಿಯಲು ಆರಂಭಿಸಿದರು. ಒಂಬತ್ತು ವರ್ಷಗಳ ಕಾಲ ಕಲಾಮಂಡಲಮ್ ನೃತ್ಯ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಿರುವನಂತಪುರದಲ್ಲಿರುವ ಕಲಾಭಾರತಿ ಪ್ರದರ್ಶನ ಕಲೆಗಳ ತರಬೇತಿ ಸಂಸ್ಥೆಯ ಪ್ರಾಂಶುಪಾಲರೂ ಆಗಿದ್ದರು.