‘ಹಣದುಬ್ಬರ ಹೆಚ್ಚಳದ ಮೇಲೆ ಹಲವಾರು ಅನಿಶ್ಚಿತತೆಗಳ ಕಾರ್ಮೋಡ ಕವಿದಿದೆ. 7ನೇ ವೇತನ ಆಯೋಗದ ಜಾರಿ, ಕಚ್ಚಾ ತೈಲ ಬೆಲೆ ಏರಿಕೆ, ಕಸ್ಟಮ್ಸ್ ಸುಂಕ ಹೆಚ್ಚಳ ಮತ್ತು ಕೇಂದ್ರ ಸರ್ಕಾರವು ತನ್ನ ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ನಿಗದಿಪಡಿಸಿರುವುದರಿಂದ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ’ ಎಂದು 6 ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಹೇಳಿದೆ.