ಶ್ರೀನಗರ: ಇಲ್ಲಿನ ವೈದ್ಯಕೀಯ ಆರೋಗ್ಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಮಂಗಳವಾರ ಪೊಲೀಸರ ಮೇಲೆ ನಡೆದ ದಾಳಿ ಮತ್ತು ಅಲ್ಲಿ ಪೊಲೀಸ್ ಕಸ್ಟಡಿಯಿಂದ ಪಾಕಿಸ್ತಾನದ ನವೀದ್ ಜಾತ್ ಎಂಬ ಉಗ್ರಗಾಮಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಶ್ರೀನಗರ ಜೈಲಿನ ಮುಖ್ಯಾಧಿಕಾರಿ ಹಿಲಾಲ್ ಅಹ್ಮದ್ ರಾಥೇರ್ ಅವರನ್ನು ರಾಜ್ಯ ಸರ್ಕಾರ ಬುಧವಾರ ಅಮಾನತು ಮಾಡಿದೆ.