‘ಕನಕದಾಸರು ಒಳ್ಳೊಳ್ಳೆ ಕೀರ್ತನೆಗಳನ್ನು ಬರೆದಿದ್ದಾರೆ. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಅವರು ಆಗ ಬರೆದಿದ್ದರು. ಈಗೇನಾದರೂ ಕನಕದಾಸರು ಬದುಕಿದ್ದಲ್ಲಿ ಇವತ್ತಿನ ಪರಿಸ್ಥಿತಿ ನೋಡಿ ಎಲ್ಲಾರು ಮಾಡುವುದು ಓಟಿಗಾಗಿ ಮತ್ತು ನೋಟಿಗಾಗಿ.. ಎಂದು ಬದಲಾಯಿಸುತ್ತಿದ್ದರೇನೊ. ಇನ್ನೇನು ಚುನಾವಣೆ ಬಂದಿದೆ. ಎಲ್ಲರ ಹಣೆಬರಹ ಭಕ್ತರ ಕೈಲಿದೆ. ಮಠಾಧೀಶರು, ಶಾಸಕರು, ಮಂತ್ರಿಗಳನ್ನು ವೇದಿಕೆ ಮೇಲೆ ಕೂರಿಸೋರು ನೀವೇ, ಇಳಿಸೋರೂ ನೀವೇ’ ಎಂದು ಮಾರ್ಮಿಕವಾಗಿ ಹೇಳಿದರು.