ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಪ್ರಯಾಣಿಸುತ್ತಿದ್ದ ಕಾರು ಬುಧವಾರ ರಾತ್ರಿ ಶಿರೂರಿನಿಂದ ಹಿರಿಯಡಕದತ್ತ ತೆರಳುತ್ತಿದ್ದಾಗ ಇನ್ನೊಂದು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಸ್ವಾಮೀಜಿ ಪಾರಾಗಿದ್ದಾರೆ.
ಶಿರೂರು ಭಾಗದಲ್ಲಿ ದನ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅಪಘಾತ ಮಾಡಿದವರು ಸಹ ದನ ಕಳ್ಳರು ಇರಬಹುದು ಎಂದು ಸ್ವಾಮೀಜಿ ಅನುಮಾನ ವ್ಯಕ್ತಪಡಿಸಿದ್ದಾರೆ.