ಆದರೆ ಈ ಸಮಸ್ಯೆ ಉಲ್ಬಣಗೊಳ್ಳಲು ಮನುಷ್ಯನೇ ಕಾರಣ ಎಂಬುದನ್ನೂ ಮನಗಾಣಬೇಕು. ಅಭಿವೃದ್ಧಿಯ ವೇಗಕ್ಕೆ ಬಿದ್ದು ನೆಲ, ಜಲ, ಗಾಳಿಯನ್ನು ಮಲಿನಗೊಳಿಸಲಾಗಿದೆ. ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಅತಿಯಾದ ಬಳಕೆ, ತರಕಾರಿ ಬೆಳೆಗಳಿಗೆ ಮಿತಿಮೀರಿ ಕೀಟನಾಶಕ ಬಳಸಿದ್ದರಿಂದ ಅನೇಕ ಪ್ರಾಣಿ– ಪಕ್ಷಿ, ಕೀಟ, ಹಾವು, ಜಲಚರಗಳು ಸಾಯುವಂತಾಗಿದೆ. ಅದರಿಂದ ಪ್ರಕೃತಿಯಲ್ಲಿ ಅಸಮತೋಲ ಸೃಷ್ಟಿಯಾಗಿದೆ.