‘ಆಗ್ರಾ ನಗರಕ್ಕೆ ನೀರು ಪೂರೈಕೆ ಕೊಳವೆಗಳನ್ನು ಅಳವಡಿಸಬೇಕಿದೆ. ಇದಕ್ಕಾಗಿ ‘ತಾಜ್ ಮಹಲ್ ಪ್ರದೇಶ’ದಲ್ಲಿರುವ 234 ಮರಗಳನ್ನು ಕತ್ತರಿಸಬೇಕಿದೆ. ಮರಗಳನ್ನು ಕತ್ತರಿಸಲು ಅನುಮತಿ ನೀಡಿ’ ಎಂದು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನೂ ಪೀಠ ನಡೆಸಿತು. ‘ಈವರೆಗೆ ತಾಜ್ ಮಹಲ್ ಪ್ರದೇಶದಲ್ಲಿ ಎಷ್ಟು ಸಸಿಗಳನ್ನು ನೆಟ್ಟಿದ್ದೀರಿ, ಮರಗಳನ್ನು ಬೆಳೆಸಿದ್ದೀರಿ ಎಂಬುದರ ಬಗ್ಗೆ ಮಾಹಿತಿ ನೀಡಿ’ ಎಂದು ಸರ್ಕಾರಕ್ಕೆ ಆದೇಶಿಸಿತು.