ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಯಪಾಲಕ ಎಂಜಿನಿಯರ್ ಎಚ್.ಆರ್. ಕೃಷ್ಣಮೂರ್ತಿ, ‘15 ಪರ್ಸೆಂಟ್ ಲಂಚ ನೀಡಬೇಕು ಎಂಬುದು ಗುತ್ತಿಗೆ ಸಿಗದವರ ಸುಳ್ಳು ಆರೋಪ. ಇ–ಟೆಂಡರ್ ಮೂಲಕವೂ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಮುಖ್ಯ ಎಂಜಿನಿಯರ್ ಆದೇಶದಂತೆ ಟೆಂಡರ್ ಪ್ರಕ್ರಿಯೆ ತಡೆ ಹಿಡಿಯಲಾಗಿದೆ’ ಎಂದು ಸ್ಪಷ್ಪಪಡಿಸಿದರು.