ಬೆಳಿಗ್ಗೆ ಸುಪ್ರಭಾತ, ಜಪಾನುಷ್ಠಾನ, ಜಿನಾಭಿಷೇಕ, ಆರಾಧನೆಗಳು ಸಂಸ್ಕಾರ ಮಂಟಪದಲ್ಲಿ ನೆರವೇರಿದವು. ಇಂದ್ರ ಇಂದ್ರಾಣಿ ಪದವೀಧಾರಕರು, ಅಷ್ಟಕನ್ನಿಕೆಯರು ಮತ್ತು ಚಪ್ಪನ್ ಕನ್ನಿಕೆಯರು ಪೂಜಾ ವಿಧಿ–ವಿಧಾನಗಳಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಪಂಚಕಲ್ಯಾಣದ ವಿಧಿಯ ಮಂಡಲ ರಚನೆ ಮಾಡಿ, ಗರ್ಭ ಸಂಸ್ಕಾರ ಕ್ರಿಯೆಯ ಪೂಜಾ ವಿಧಿ ನೆರವೇರಿಸಲಾಯಿತು.