‘ಚಿನ್ನಮಾಲ ಆಂಧ್ರಪ್ರದೇಶದ ನೆಲ್ಲೂರಿನವ. ಮಹದೇವಪುರ ಠಾಣೆ ವ್ಯಾಪ್ತಿಯ ಬಿ.ನಾರಾಯಣಪುರದ ಗುರುಮೂರ್ತಿ ಬಡಾವಣೆಯಲ್ಲಿ ಆತನ ಚಿಕ್ಕಮ್ಮ ಕೊಂಡಮ್ಮ (65) ವಾಸವಿದ್ದರು. ಆಗಾಗ ಅವರ ಮನೆಗೆ ಹೋಗುತ್ತಿದ್ದ ಆತ, ಹಣ ನೀಡುವಂತೆ ಪೀಡಿಸುತ್ತಿದ್ದ. ಅಕ್ಕನ ಮಗನಾಗಿದ್ದರಿಂದ, ಆರಂಭದಲ್ಲಿ ಕೊಂಡಮ್ಮ ಹಣ ಕೊಟ್ಟು ಕಳುಹಿಸುತ್ತಿದ್ದರು. ಆತನ ಕಾಟ ಹೆಚ್ಚಾದಾಗ, ಹಣ ಕೊಡಲು ನಿರಾಕರಿಸಿದ್ದರು’ ಎಂದು ನರೇಂದ್ರ ತಿಳಿಸಿದರು.