ಬುಧವಾರ ಬೆಳಿಗ್ಗೆ ಮೋಡ ಮುಸುಗಿದ ವಾತಾವರಣ ಇತ್ತಾದರೂ, ಮಳೆಯ ನಿರೀಕ್ಷೆ ಇರಲಿಲ್ಲ. ರೈತರು ಎಂದಿನಂತೆ ಅವರೆ ಹಾಗೂ ಹುರುಳಿ ಕಾಯಿ ಒಕ್ಕಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು. ಸಂಜೆ ಕತ್ತಲಾಗುತ್ತಿದ್ದಂತೆ ಆಕಾಶ ಕಪ್ಪುಗಟ್ಟಿತು. ಆದರೂ ರೈತರು ಅದನ್ನು ನಿರ್ಲಕ್ಷಿಸಿ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಇದ್ದಕ್ಕಿದಂತೆ ಆಕಾಶದಲ್ಲಿ ಗುಡುಗು ಸಿಡಿಲಿನ ಆರ್ಭಟ ಶುರುವಾಯಿತು.