ಈ ಸಂಬಂಧ ರಾಜೇಶ್ ದೂರು ಕೊಟ್ಟಿದ್ದಾರೆ. ‘ಕೊಳಾಯಿ ರಿಪೇರಿ ಮಾಡುವ ನಾನು, ಮಧ್ಯಾಹ್ನ 3 ಗಂಟೆಗೆ ಅಕ್ಕಿಪೇಟೆಯಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಕರೆ ಮಾಡಿದ ಮಾವನ ಮಗ ಶೇಖರ್, ಕುಮಾರ ಪಾರ್ಕ್ ಬಳಿ ಕೆಲಸ ಇರುವುದಾಗಿ ತಿಳಿಸಿದ. ಅಂತೆಯೇ ಬಾಳೆಕಾಯಿ ಮಂಡಿ ಮಾರ್ಗವಾಗಿ ಅಲ್ಲಿಗೆ ಹೋಗುವಾಗ ಮೂವರು ಮಾರಕಾಸ್ತ್ರ ಹಿಡಿದು ಎದುರು ಬಂದರು.’