ಹಲಗೂರಿನಿಂದ ಆರಂಭವಾದ ಕುಮಾರಪರ್ವ ಯಾತ್ರೆ ರಾತ್ರಿ 10.30ಕ್ಕೆ ಕಿರುಗಾವಲು ತಲುಪಿದೆ. ಬಳಿಕ ಕುಮಾರಸ್ವಾಮಿ ವಾಸ್ತವ್ಯಕ್ಕಾಗಿ ಮೈಸೂರಿಗೆ ತೆರಳಲು ಮುಂದಾದಾಗ, ಪಟ್ಟಣದ ಜೆಡಿಎಸ್ ಕಚೇರಿ ಉದ್ಘಾಟಿಸುವಂತೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಈಗ ತಡವಾಗಿದೆ ಎಂದು ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ಮಧ್ಯಪ್ರವೇಶಿಸಿದ ಅನ್ನದಾನಿ ಅವರ ಮೇಲೆ ಸಿಟ್ಟಿಗೆದ್ದ ಅವರು ಕೈ ಎತ್ತಿದಂತೆ ಕಾಣುವ ದೃಶ್ಯಗಳು ವಿಡಿಯೊದಲ್ಲಿವೆ.