ಹೆತ್ತೂರು: ಯಸಳೂರು ಹೋಬಳಿಯ ಯಡಕೇರಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಕಾಫಿ, ಬಾಳೆ, ಅಡಿಕೆ ಹಾಗೂ ಮೆಣಸಿಕಾಯಿ ಬೆಳೆಯನ್ನು ತುಳಿದು ಹಾಕಿವೆ. ಗ್ರಾಮದ ರಘು, ಬಾಲಕೃಷ್ಣ, ರಮೇಶ್ ಎಂಬುವರ ತೋಟದಲ್ಲಿನ ಅಡಿಕೆ, ಬಾಳೆ ತೋಟಕ್ಕೆ ಬುಧವಾರ ಮತ್ತು ಗುರುವಾರ ತಡರಾತ್ರಿ ನುಗ್ಗಿರುವ ಸುಮಾರು 18 ಕಾಡಾನೆಗಳ ಹಿಂಡೊಂದು ದಾಂದಲೆ ನಡೆಸಿ ಅಪಾರ ಪ್ರಮಾಣದ ಬೆಳೆಯನ್ನು ನಾಶ ಮಾಡಿದ್ದು, ಜೊತೆಗೆ ನೀರಾವರಿ ಸೌಲಭ್ಯಕ್ಕಾಗಿ ಇಟ್ಟಿದ್ದ ಪೈಪ್ಗಳನ್ನು ಸಹ ತುಳಿದು ಹಾಕಿದೆ.