ಕಲಬುರ್ಗಿಯ ಶ್ರೀಗುರು ವಿದ್ಯಾಪೀಠದ ಬಸವರಾಜ ಡಿಗ್ಗಾಗಿ ಅವರು ಸುಮಾರು ₹11 ಲಕ್ಷ ವೆಚ್ಚದ ಕಬ್ಬಿಣದ ರಾಡ್ ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ದೇವರಾಯ ನಾಡೆಪಲ್ಲಿ ₹50 ಸಾವಿರ, ವೀರಶೈವ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ₹50 ಸಾವಿರ ನೀಡಿದ್ದಾರೆ. ಅಲ್ಲದೆ ಸಂಸದ ಬಸವರಾಜ ಪಾಟೀಲ ಸೇಡಂ ಅವರು ಕಟ್ಟಡಕ್ಕೆ ಬೇಕಾದ ಕಿಟಕಿ, ಬಾಗಿಲು ಸೇರಿದಂತೆ ಇನ್ನಿತರ ಸುಮಾರು ₹2 ರಿಂದ 3 ಲಕ್ಷದ ಸಾಮಾಗ್ರಿಗಳನ್ನು ದೇಣಿಗೆ ರೂಪದಲ್ಲಿ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶಿವಯ್ಯಸ್ವಾಮಿ ಬಿಬ್ಬಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.