‘ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ಭೂಪಟವನ್ನೇ ವಿರೂಪಗೊಳಿಸಲಾಗಿದೆ. ಸಿದ್ದರಾಮಯ್ಯನವರೆ ನಿಮಗೆ ಕರ್ನಾಟಕ, ಭೂಪಟ, ಧ್ವಜ ಚುನಾವಣಾ ಪ್ರಚಾರದ ವಸ್ತು ಇರಬಹುದು. ನನಗೆ, ನಾಡಿಗೆ ಇದರ ಬಗ್ಗೆ ಅತೀವ ಭಕ್ತಿ, ಗೌರವವಿದೆ. ಭಾರತದ ಭೂಪಟ ವಿರೂಪಗೊಳಿಸಿದಷ್ಟೇ ಅಕ್ಷಮ್ಯ, ರಾಜ್ಯದ ಭೂಪಟ ವಿರೂಪಗೊಳಿಸುವುದು. ಚುನಾವಣಾ ಪ್ರಚಾರ ಮಾಡಿ, ಸ್ವಾಭಿಮಾನವನ್ನು ಅಡವಿಟ್ಟಲ್ಲ’ ಎಂದು ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.