‘ಇತ್ತೀಚೆಗೆ ಹೋಟೆಲ್ ವ್ಯವಹಾರದಲ್ಲಿ ನಷ್ಟ ಉಂಟಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಸಂಬಂಧಿಕರ ಬಳಿ ಸಾಲ ಕೇಳಿದ್ದೆ. ನನ್ನ ಬ್ಯಾಂಕ್ ಖಾತೆ ಇಲ್ಲದ ಕಾರಣ, ಅವರು ಶೈಲೇಂದ್ರನ ಖಾತೆಗೆ ₹ 49 ಸಾವಿರ ಜಮೆ ಮಾಡಿದ್ದರು. ಆದರೆ, ಈತ ಆ ಹಣ ಕೊಡಲು ಸತಾಯಿಸು
ತ್ತಿದ್ದ. ಹೀಗಾಗಿ, ಸ್ನೇಹಿತರ ಜತೆ ಸೇರಿ ಶುಕ್ರವಾರ ಮಧ್ಯಾಹ್ನ ಕಾರಿನಲ್ಲಿ ಅಪಹರಿಸಿದ್ದೆ’ ಎಂದು ಸಿಟೇಜ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದರು.