‘ಮನೆಯಲ್ಲಿ ನಾನು, ಅಕ್ಕನ ಮಗ ನಿಶಾಂತ್ ಹಾಗೂ 80 ವರ್ಷದ ತಾಯಿ ಮುತ್ತಮ್ಮ ನೆಲೆಸಿದ್ದೇವೆ. ಕೆಲಸದ ನಿಮಿತ್ತ ನಿಶಾಂತ್ ವಾರದ ಹಿಂದೆ ಊರಿಗೆ ಹೋಗಿದ್ದ. ಎಂದಿನಂತೆ ಗುರುವಾರ ಬೆಳಿಗ್ಗೆ 10 ಗಂಟೆಗೆ ಕೆಲಸಕ್ಕೆ ಹೋದ ನಾನು, ಮಧ್ಯಾಹ್ನ 2 ಗಂಟೆಗೆ ಊಟಕ್ಕೆ ಮನೆಗೆ ಮರಳಿದೆ. ತಾಯಿ ಹುಷಾರಿಲ್ಲದೆ ಕೋಣೆಯಲ್ಲಿ ಮಲಗಿದ್ದರು. ಬೀರು ಬಾಗಿಲು ತೆರೆದಿತ್ತು. ಅದರಲ್ಲಿದ್ದ ಹಣ ಹಾಗೂ ಒಡವೆಗಳು ಕಳವಾಗಿದ್ದವು’ ಎಂದು ಪದ್ಮಾವತಿ ಆಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ.