ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಲು ಸಭೆ ನಡೆಸುವಂತೆ ನಗರಸಭೆಯ ಆಯುಕ್ತರಿಗೆ ಪತ್ರ ಸಲ್ಲಿಸುವಾಗ ಬಂಡಾಯ ಕಾಂಗ್ರೆಸಿನ ಕೆ.ಸಿ.ಮುರಳಿ ಜತೆಗೆ ಜೆಡಿಎಸ್ನ ಎಂ.ಭಕ್ತವತ್ಸಲಂ, ಬಿಜೆಪಿಯ ಮುಖಂಡರು ಸೇರಿದಂತೆ ಹಲ ಸದಸ್ಯರು ಹಾಜರಿದ್ದರು. ಜೆಡಿಎಸ್ ಮತ್ತು ಬಿಜೆಪಿ ಸದ್ಯಕ್ಕೆ ಒಂದಾಗಿದ್ದಾರೆ. ಅವರು ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ನಿರೀಕ್ಷಿತ ಬೆಂಬಲ ಸಿಗದೇ ಇದ್ದರಿಂದ ಸುಮಾರು ಎರಡು ತಿಂಗಳಿಂದ ಸದಸ್ಯರು ಪ್ರವಾಸ ಭಾಗ್ಯದಲ್ಲಿಯೇ ನಿರತರಾಗಿದ್ದಾರೆ.