ಕಲ್ಲೂರಿನ ದಲಿತ ರೈತ ತಿರುಮಲಗಿರಯ್ಯ, ನಂಜುಂಡಪ್ಪ ಅವರ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಬೆಳೆದಿದ್ದ ರಾಗಿಮೆದೆಯನ್ನು ಕಣದಲ್ಲಿ ಕಾಳುಕಡ್ಡಿ ಬೇರ್ಪಡಿಸಿ ರಾಗಿಯನ್ನು ಚೀಲಕ್ಕೆ ತುಂಬಿ ಲಗೇಜ್ ಆಟೊದಲ್ಲಿ ಮನೆಗೆ ತೆಗೆದುಕೊಂಡು ಸವರ್ಣೀಯರ ಜಮೀನಿನಲ್ಲಿ ಹೋಗುತ್ತಿದ್ದರು. ಪಕ್ಕದ ಜಮೀನಿನ ಮಾಲೀಕ ಕೆ.ಟಿ.ನರಸಿಂಹಮೂರ್ತಿ, ದಿಲೀಪ, ರೋಹಿತ್, ಹೇಮಂತ ಹಾಗೂ ನೀಲಮ್ಮ ಎಂಬುವವರು ತಮ್ಮ ಜಮೀನಿನಲ್ಲಿ ದಲಿತ ವ್ಯಕ್ತಿ ರಾಗಿ ತೆಗೆದುಕೊಂಡು ಹೋಗಲು ಅವಕಾಶ ಕೊಡುವುದಿಲ್ಲ ಎಂದು ಅಡ್ಡಿಪಡಿಸಿ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದರು ಎಂದು ದೂರಲಾಗಿದೆ.