ವಿವಿಧ ರಾಜ್ಯಗಳಲ್ಲಿರುವ ಉದ್ಯಮಿಗಳು ನಗರದಲ್ಲಿ ಭಾನುವಾರ ಸೇರಿ, ಅಖಿಲ ಭಾರತ ಉಪ್ಪಿನಕಾಯಿ ತಯಾರಕರ ಸಂಘಕ್ಕೆ ಚಾಲನೆ ನೀಡಿದರು. ಕರ್ನಾಟಕ ಉಪ್ಪಿನಕಾಯಿ ಉದ್ಯಮಿಗಳ ಸಂಘ ಕರೆದಿದ್ದ ಮೊದಲ ಸಭೆಯಲ್ಲಿ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಉದ್ಯಮಿಗಳು ಪಾಲ್ಗೊಂಡಿದ್ದರು.