‘500 ಮೀಟರ್ ವ್ಯಾಪ್ತಿಯ ಒಳಗೆ ತೆರೆದ ಬಾವಿ, ಕೈಪಂಪು ಹಾಗೂ ಬೋರ್ವೆಲ್ ಇದ್ದರೆ ಮತ್ತೊಂದು ಬಾವಿ ಕೊರೆಯಲು ಅವಕಾಶ ನಿರಾಕರಿಸಲಾಗುತ್ತಿದೆ. ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಗ್ರಾಮೀಣ ಪ್ರದೇಶ ಹಾಗೂ ನಗರದ ಹಲವು ಬಡಾವಣೆಗಳಲ್ಲಿ ಹೊಸ ಕೊಳವೆಬಾವಿ ಕೊರೆಯಲು ಸಾಧ್ಯವಾಗುವುದಿಲ್ಲ. 2,500 ಅಡಿ ಕೊರೆಯುವ ಕೋಲಾರ ಜಿಲ್ಲೆಯಲ್ಲಿ ಇಲ್ಲದ ನಿಯಮ ಮೈಸೂರಿನಲ್ಲಿ ಏಕೆ’ ಎಂದು ಪ್ರಶ್ನಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ಇದ್ದರು.