ತಾಲ್ಲೂಕಿನ ಸೋಮನಹಳ್ಳಿಯ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಆಶಿಯಾಗೆ ಬೆಂಗಳೂರಿನ ಜೀನ್ಸ್ ಸ್ಟಿಚ್ವೇರ್ ಕಂಪನಿಯ ಉದ್ಯೋಗಿ ಅಕ್ಷಯಕುಮಾರ್ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಈ ವಿಷಯ ತಿಳಿದು ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಬಳಿಕ ಆಶಿಯಾ ಅವರನ್ನು ಕೆಲಸ ಬಿಡಿಸಿದ ಪೋಷಕರು, ಮೈಸೂರಿನ ಜಾಮೀಯಾ ವಿದ್ಯಾರ್ಥಿ ನಿಯಲಕ್ಕೆ ಕುರಾನ್ ಕಲಿಕೆಗಾಗಿ ಸೇರಿಸಿದ್ದರು.