ಬಹಮನಿ ಉತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ ಶೋಭಾ ಕರಂದ್ಲಾಜೆ ಅವರನ್ನು ಕಲಬುರ್ಗಿ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಅವರು ‘ಹೂ ಈಸ್ ಶಿ’ ಎಂದು ಪ್ರಶ್ನಿಸಿದ್ದಾರೆ. ಇದು ಸರಿಯಲ್ಲ.
ಹೀಗೆ ಪ್ರಶ್ನಿಸುವ ಮೊದಲು, ಶೋಭಾ ಅವರು ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿ ಎಂಬುದನ್ನು ಸಚಿವರು ಮನಗಾಣಬೇಕಿತ್ತು. ಮೇಲಾಗಿ, ಈ ಉತ್ಸವವನ್ನು
ವಿರೋಧಿಸುವ ಅಥವಾ ಬೆಂಬಲಿಸುವ ಹಕ್ಕು ಎಲ್ಲರಿಗೂ ಇದೆಯಲ್ಲವೇ?