ಪ್ರದೇಶಿಕ ಭಾಷೆ ಕಡ್ಡಾಯ, ಇಚ್ಛೆಯಿಂದ ಮತ್ತೊಂದು: ಕು.ವೆಂ.ಪು. ಅವರ ಸಲಹೆ
ಬೆಂಗಳೂರು, ಫೆ. 18– ‘ಪ್ರದೇಶಿಕ ಭಾಷೆ ಕಡ್ಡಾಯವಾಗಬೇಕು, ಬೇರೆ ಯಾವುದಾದರೊಂದು ಭಾಷೆಯನ್ನು ಐಚ್ಛಿಕವಾಗಿ ಕಲಿಯಲು ಅವಕಾಶವಿರಬೇಕು’. ಇದೇ ಇಂದಿನ ಸ್ಥಿತಿಯಲ್ಲಿ ಭಾಷಾ ಸಮಸ್ಯೆಯ ಪರಿಹಾರಕ್ಕೆ ಅನುಸರಿಸಬಹುದಾದ ರಾಜಮಾರ್ಗವೆಂದು ರಾಷ್ಟ್ರಕವಿ ಕು.ವೆಂ.ಪು.ರವರು ಇಂದು ಇಲ್ಲಿ ಘೋಷಿಸಿದರು.