‘ಭಯೋತ್ಪಾದನೆಗಿಂತ ಭ್ರಷ್ಟಾಚಾರವೇ ಭಯಾನಕವಾದದ್ದು’ ಎಂಬ ವಾಸ್ತವ ಅರಿತು ಹೊಸ ಸರ್ಕಾರದ ಮುಖ್ಯಮಂತ್ರಿ ಕೆಲಸ ಮಾಡಲಿ. ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ... ಯಾರಾದರೂ ಮುಖ್ಯಮಂತ್ರಿಯಾಗಲಿ. ಆದರೆ ಅಗ್ಗದ, ಓಲೈಸುವ, ಅರ್ಥಹೀನ ಭಾಗ್ಯಗಳನ್ನು ಬದಿಗಿಟ್ಟು ಪ್ರಾಮಾಣಿಕವಾಗಿ ರೈತರ ಹಿತ, ಬಡವರ ಕಾಳಜಿ ತೋರಲಿ. ಜಾತಿ ಮತ ಭೇದವಿಲ್ಲದೆ ಎಲ್ಲಾ ಹಂತಗಳಲ್ಲೂ ಉಚಿತ ಶಿಕ್ಷಣ ಸಿಗುವಂತಾಗಲಿ.