ಢಾಕಾ (ಪಿಟಿಐ): ಭ್ರಷ್ಟಾಚಾರ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ, ‘ಮುಂದಿನ ಡಿಸೆಂಬರ್ನಲ್ಲಿ ಬರಲಿರುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಮಾಡಿರುವ ರಾಜಕೀಯ ಷಡ್ಯಂತ್ರವಿದು’ ಎಂದು ಆರೋಪ ಮಾಡಿದ್ದಾರೆ.
‘ನ್ಯಾಯಾಲಯವು ವಿಚಾರಣೆಯನ್ನು ನಿಗದಿಪಡಿಸಿದ ತಕ್ಷಣವೇ, ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗುವುದು’ ಎಂದು ಅವರ ವಕೀಲ ಸಾಗಿರ್ ಹುಸೇನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.