‘ದೇಗುಲದಿಂದ ಪಾದಗಟ್ಟೆಗೆ ಹೋಗಿ ತೇರು ವಾಪಸ್ ಬರುತ್ತಿತ್ತು. ಮೂಲ ಸ್ಥಾನದಿಂದ ಸುಮಾರು ಹತ್ತು ಅಡಿ ದೂರದಲ್ಲಿದ್ದಾಗ ತೇರಿನ ಮುಂದಿನ ಗಾಲಿಗಳ ಅಚ್ಚು ಮುರಿದು ಉರುಳಿ ಬಿದ್ದಿದೆ. ತೇರಿನ ಒಳಭಾಗದಲ್ಲಿ ಆರು ಜನ ಕುಳಿತಿದ್ದರು. ಅದರಲ್ಲಿ ಗ್ರಾಮದ ವಿರೂಪಾಕ್ಷ (17) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿರುವುದನ್ನು ಹೊರತುಪಡಿಸಿದರೆ ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ತೇರು ನಿಧಾನವಾಗಿ ಉರುಳಿ ಬಿದ್ದದ್ದರಿಂದ ಜನ ದೂರ ಓಡಿ ಹೋಗಿದ್ದಾರೆ’ ಎಂದು ತಹಶೀಲ್ದಾರ್ ಎಚ್. ವಿಶ್ವನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.