ನಾಯಕಿ ಹರ್ಮನ್ಪ್ರೀತ್, ಉಪ ನಾಯಕಿ ಮಂದಾನ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಮಧ್ಯಮ ಕ್ರಮಾಂಕದಲ್ಲಿ ತಂಡದ ಆಧಾರಸ್ತಂಭಗಳೆನಿಸಿದ್ದಾರೆ. ಇವರು ಹಿಂದಿನ ಪಂದ್ಯದಲ್ಲಿ ಹರಿಣಗಳ ನಾಡಿನ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಆದರೆ ಜೆಮಿಮಾ ರಾಡ್ರಿಗಸ್, ಅನುಜಾ ಪಾಟೀಲ್, ಶಿಖಾ ಪಾಂಡೆ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್ವುಮನ್ ತಾನಿಯಾ ಭಾಟಿಯಾ ಅವರು ಎರಡಂಕಿಯ ಮೊತ್ತ ದಾಟಲು ವಿಫಲರಾಗಿದ್ದರು. ಇವರು ಬುಧವಾರದ ಹೋರಾಟದಲ್ಲಿ ಲಯ ಕಂಡುಕೊಳ್ಳಬೇಕಿದೆ.