‘ಕಡಿಮೆ ಸಂಬಳ ಪಡೆದು ಕೆಲಸ ಮಾಡುತ್ತಿದ್ದ ಕಾರಣಕ್ಕೆ ಕಾರ್ಮಿಕರು ನಗರದಲ್ಲಿ ಬಾಡಿಗೆ ಮನೆ ಮಾಡಿರಲಿಲ್ಲ. ಹೀಗಾಗಿ, ಗೋದಾಮಿನಲ್ಲೇ ವಾಸವಿದ್ದರು. ಸೋಮವಾರ
ರಾತ್ರಿ 11.30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆ ಕ್ಷಣಾರ್ಧದಲ್ಲಿ ಗೋದಾಮನ್ನು ಪೂರ್ತಿ ಆವರಿಸಿ, ನಿದ್ರೆ ಮಾಡುತ್ತಿದ್ದ ಕಾರ್ಮಿಕರು ಸಜೀವವಾಗಿ ದಹನವಾಗಿದ್ದಾರೆ’ ಎಂದು ಚಂದ್ರಾಲೇಔಟ್ ಪೊಲೀಸರು ತಿಳಿಸಿದರು.