‘ರಾತ್ರಿ ತೋಟ ಬೆಂಗ್ರೆಯ ಮಸೀದಿಯೊಂದಕ್ಕೆ ಸೋಡಾ ಬಾಟಲಿ ಬಿಸಾಡಲಾಗಿದ್ದು, ಕಿಟಕಿಗೆ ಸ್ವಲ್ಪ ಹಾನಿಯಾಗಿದೆ. ಮತ್ತೊಂದು ಮನೆಗೆ ಕಲ್ಲು ತೂರಲಾಗಿದ್ದು, ವಾಹನ ಜಖಂಗೊಂಡಿದೆ. ಘಟನೆಯಲ್ಲಿ ನಾಲ್ಕೈದು ಮಂದಿಗೆ ಗಾಯವಾಗಿದ್ದು, ಪೊಲೀಸ್ ವಾಹನಕ್ಕೂ ಹಾನಿಯಾಗಿದೆ. ಘಟನೆ ನನಗೆ ನೋವು ತಂದಿದೆ’ ಎಂದು ಲೋಬೊ ತಿಳಿಸಿದರು.